ಹಂಝ ಸಾಗರ್ ನಿಧನ

Update: 2020-11-30 15:29 GMT

ಉಪ್ಪಿನಂಗಡಿ: ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ, ಹೊಟೇಲ್ ಉದ್ಯಮಿ ಯು.ಕೆ. ಹಂಝ ಸಾಗರ್ (69) ನ.30ರಂದು ಬೆಳಗ್ಗೆ ಅಸೌಖ್ಯದಿಂದ ನೆಲ್ಯಾಡಿಯ ಸ್ವಗೃಹದಲ್ಲಿ ನಿಧನರಾದರು.

ಮೂಲತಃ ಉಪ್ಪಿನಂಗಡಿ ಕೆಂಪಿಮಜಲು ನಿವಾಸಿಯಾಗಿದ್ದಾರೆ. ಕಳೆದ ಸುಮಾರು ಮೂವತ್ತೈದು ವರ್ಷಗಳಿಂದ ನೆಲ್ಯಾಡಿಯಲ್ಲಿ ನೆಲೆಸಿ ಹೋಟೆಲ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಶೈಖುನಾ ತಾಜುಲ್ ಉಲಮಾ ಇವರ ಆಪ್ತರಾಗಿದ್ದ ಇವರು ಸುನ್ನಿ ಮ್ಯಾನೇಜ್ ಮೆಂಟ್ ಅಸೋಶಿಯೇಶನ್ ಸದಸ್ಯರೂ, ನೆಲ್ಯಾಡಿ ಸುನ್ನಿ ಯುವಜನ ಸಂಘ ಇದರ ಸ್ಥಾಪಕರು ಆಗಿದ್ದಾರೆ. ರಾಜಕೀಯ, ಶೈಕ್ಷಣಿಕ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಇವರು ಕಳೆದ 1 ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಆರು ಮಂದಿ ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳ ನಾಯಕರು, ಜಿಲ್ಲಾ ನೇತಾರರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ