ಮೋಹನ ರಾವ್
Update: 2020-12-14 12:55 GMT
ಉಡುಪಿ, ಡಿ.14: ಉಡುಪಿ ಹನುಮಂತನಗರ ನಿವಾಸಿಯಾದ ಸಿಟಿ ಬಸ್ ಚಾಲಕ ಮೋಹನ್ರಾವ್(48) ಇಂದು ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ತಿಯರನ್ನು ಅಗಲಿದ್ದಾರೆ.
ಉಡುಪಿ ಸಿಟಿ ಬಸ್ ನೌಕರರ ತುರ್ತು ಸೇವಾ ಸಂಘದ ಖಜಾಂಚಿಯಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದ ಮೋಹನ್ ರಾವ್, 2019-20ನೇ ಸಾಲಿನಲ್ಲಿ ಉಡುಪಿ ಜಿಲ್ಲಾ ಉತ್ತಮ ಚಾಲಕ ಪ್ರಶಸ್ತಿಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದರು.
ಉಡುಪಿ ಸಿಟಿ ಬಸ್ಗಳ ಮಾಲಕರು ಹಾಗೂ ನೌಕರರು ಮೋಹನ ರಾವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.