ಮಹಿಳೆಗೆ ಕಿರುಕುಳ ಆರೋಪ: ಬಿಬಿಎಂಪಿ ಮಾಜಿ ಸದಸ್ಯನ ವಿರುದ್ಧ ಎಫ್ಐಆರ್
Update: 2020-12-22 12:24 GMT
ಬೆಂಗಳೂರು, ಡಿ.22: ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದಡಿ ಬಿಬಿಎಂಪಿ ಮಾಜಿ ಸದಸ್ಯ ಧನರಾಜ್ ವಿರುದ್ಧ ಇಲ್ಲಿನ ವಿಲ್ಸನ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಹಿಂದೆ ಚಿಕ್ಕಪೇಟೆ ಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ಸದಸ್ಯ ಆಗಿದ್ದ ಧನರಾಜ್ ಅವರು ಲಾಲ್ಬಾಗ್ ರಸ್ತೆಯಲ್ಲಿರುವ ಅಂಗಡಿಯೊಂದಕ್ಕೆ ತೆರಳಿ ಪೈಪ್ವೊಂದನ್ನು ಖರೀದಿಸಿ ಕಡಿಮೆ ಬೆಲೆಗೆ ನೀಡಿ ಎಂದು ಅಂಗಡಿ ಮಾಲಕ ಸಾವರ್ ಮಲ್ ಅಗರ್ವಾಲ್ಗೆ ಒತ್ತಡ ಹಾಕಿದ್ದಾರೆ.
ಇದನ್ನು ಗಮನಿಸಿ ಪೂಜಾ ಅಗರ್ವಾಲ್ ಎಂಬುವರು ಪ್ರಶ್ನಿಸಿದಾಗ ಆಕೆಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.