ಮನೆಗೆ ನುಗ್ಗಿ ಚಿನ್ನದಂಗಡಿ ಮಾಲಕನ ಪುತ್ರನ ಹತ್ಯೆಗೈದ ದುಷ್ಕರ್ಮಿಗಳು

Update: 2021-01-14 16:31 GMT

ಯಾದಗಿರಿ, ಜ.14: ಹಾಡಹಾಗಲೇ ಚಿನ್ನದಂಗಡಿ ಮಾಲಕನ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ವ್ಯಾಪಾರಿಯನ್ನು ಕೊಲೆಗೈದು ಚಿನ್ನಾಭರಣ ದೋಚಿರುವ ಘಟನೆ ಇಲ್ಲಿನ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನರೇಂದ್ರ(22) ಎಂಬಾತ ಕೊಲೆಯಾಗಿರುವ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಇಲ್ಲಿನ ಹುಣಸಗಿ ಪಟ್ಟಣದ ಧನಲಕ್ಷ್ಮಿ ಜುವೆಲ್ಲರ್ಸ್‍ನ ಮಾಲಕ ಜಗದೀಶ್ ಶಿರವಿ ಎಂಬವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳ ತಂಡ, ಮಾಲಕನ ಪುತ್ರ ನರೇಂದ್ರನನ್ನು ಕೊಲೆಗೈದು, 5 ತೊಲ ಬಂಗಾರ ಹಾಗೂ 2 ಲಕ್ಷ ರೂಪಾಯಿಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಂಬಂಧ ಹುಣಸಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News