ನಿರ್ದೇಶಕರ ಹುದ್ದೆಗಾಗಿ ಅರ್ಜಿ ಆಹ್ವಾನ

Update: 2021-01-15 17:58 GMT

ಬೆಂಗಳೂರು, ಜ.15: ನಿವೃತ್ತಿಯಾಗಿರುವ ಹಾಗೂ ನಿವೃತ್ತಿಯಾಗಲಿರುವ ಬ್ರಿಗೇಡಿಯರ್ ಮತ್ತು ಕರ್ನಲ್ (ಆಯ್ಕೆ ದರ್ಜೆ) ರ್‍ಯಾಂಕ್ ಅಧಿಕಾರಿಗಳಿಂದ ಅಥವಾ ನೌಕಪಡೆ ಮತ್ತು ವಾಯಸೇನೆಯಲ್ಲಿ ಅವರ ಸಮಾನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಬ್ರಿಗೇಡಿಯರ್ ಅಥವಾ ನೌಕಪಡೆ ಮತ್ತು ವಾಯುಸೇನೆಯಲ್ಲಿ ಸಮಾನ ಶ್ರೇಣಿಯ ಸೂಕ್ತ ನಿವೃತ್ತ ಅಧಿಕಾರಿ ಲಭ್ಯವಿಲ್ಲದಿದ್ದಲ್ಲಿ ಮಾತ್ರ ಕರ್ನಲ್ ಅಥವಾ ನೌಕಪಡೆ ಮತ್ತು ವಾಯುಸೇನೆಯಲ್ಲಿ ಸಮಾನ ಶ್ರೇಣಿಯ ನಿವೃತ್ತ ಅಧಿಕಾರಿಯನ್ನು ನೇಮಿಸಲಾಗುವುದು.

ಈ ಕುರಿತು ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಕರ್ನಾಟಕ ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ನಂ 58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು-560025. dirdswarblr@gmail.com, ಕಾರ್ಯದರ್ಶಿ secyksb-mod@nic.in ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News