ನೂತನ ಸಚಿವರಿಗೆ ಖಾತೆ ಹಂಚಿಕೆ: ಅಂಗಾರಗೆ ಮೀನುಗಾರಿಕೆ, ಬಂದರು ಖಾತೆ

Update: 2021-01-21 05:42 GMT

ಬೆಂಗಳೂರು: ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಗೊಂಡ ನೂತನ ಸಚಿವರಿಗೆ ಸಂಭಾವ್ಯ ಖಾತೆ ಹಂಚಿಕೆ ಪಟ್ಟಿ ಬಿಡುಗಡೆಯಾಗಿದೆ. 

ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಉಳಿದಿದ್ದು, ಸಂಜೆ ವೇಳೆಗೆ ಪಟ್ಟಿ ಅಧಿಕೃತಗೊಳ್ಳಲಿದೆ ಎಂದು ತಿಳಿದುಬಂದಿದ್ದು, ಕೆಲವು ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ.

ನೂತನ ಸಚಿವರ ಸಂಭಾವ್ಯ ಖಾತೆ ಹಂಚಿಕೆ ವಿವರ : ಎಸ್. ಅಂಗಾರ : ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ, ಸಿ.ಪಿ.ಯೋಗೇಶ್ವರ್ : ಸಣ್ಣ ನೀರಾವರಿ, ಆರ್. ಶಂಕರ್ : ಪೌರಾಡಳಿತ, ಎಂಟಿಬಿ ನಾಗರಾಜ್ : ಅಬಕಾರಿ, ಮುರುಗೇಶ್ ನಿರಾಣಿ: ಖನಿಜ, ಉಮೇಶ್ ಕತ್ತಿ: ಆಹಾರ ಮತ್ತು ನಾಗರಿಕ ಪೂರೈಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News