ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಮಿತಿ ವಾರ್ಷಿಕ ಮಹಾಸಭೆ; ನೂತನ ಸಮಿತಿ ಅಸ್ತಿತ್ವಕ್ಕೆ

Update: 2021-01-30 14:13 GMT

ಬೆಂಗಳೂರು: ಎಸ್ಸೆಸ್ಸೆಫ್  ಬೆಂಗಳೂರು ಜಿಲ್ಲಾ ಸಮಿತಿ ವಾರ್ಷಿಕ ಮಹಾಸಭೆ ಮರ್ಖಿನ್ಸ್ ಆಡಿಟೋರಿಯಂನಲ್ಲಿ ನಡೆಯಿತು. ಹಬೀಬ್ ನೂರಾನಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್‌ಜೆಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಫರ್ ಅಹ್ಮದ್ ನೂರಾನಿ  ಉದ್ಘಾಟಿಸಿದರು. ಮುಜೀಬ್ ಸಖಾಫಿ, ತಾಜುದ್ದೀನ್ ಫಾಳಿಲಿ, ಅಬ್ದುರ್ರಹ್ಮಾನ್ ಹಾಜಿ, ಮುನೀರ್, ಹಕೀಂ ಅವರು ಮಾತನಾಡಿದರು.

ಬಳಿಕ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಬೀಬ್ ನೂರಾನಿ, ಕಾರ್ಯದರ್ಶಿಯಾಗಿ ಅಖ್ತರ್ ಹುಸೈನ್, ಕೋಶಾಧಿಕಾರಿಯಾಗಿ ಶಬೀಬ್, ಉಪಾಧ್ಯಕ್ಷರಾಗಿ ಶಂಸುದ್ದೀನ್ ಅಝ್ಹರಿ, ಸ್ವಾದಿಖ್ ಸಖಾಫಿ, ಕಾರ್ಯದರ್ಶಿಗಳಾಗಿ ಅಲ್ತಾಫ್ ಯಾರಬ್ ನಗರ, ವಸೀಂ ಹೆಗ್ಡೆ ನಗರ, ಯೂಸುಫ್ ಪೀಣ್ಯ, ಲತ್ವೀಫ್ ನಈಮಿ, ಅಬೂಬಕರ್ ಅಹ್ಸನಿ, ಮುಹಮ್ಮದ್ ಯಶವಂತಪುರ ಅವರನ್ನು ನೂತನ ಸಮಿತಿಗೆ ನೇಮಕ ಮಾಡಲಾಯಿತು.

ಸಭೆಯಲ್ಲಿ ಏಳು ಡಿವಿಷನ್ ಗಳಿಂದ 150ಕ್ಕೂ ಮಿಕ್ಕ ಕೌನ್ಸಿಲ್ ಭಾಗವಹಿಸಿದರು. ರಾಜ್ಯ ಸಮಿತಿಯ ಪ್ರತಿನಿಧಿಗಳಾದ ಅಶ್ರಫ್ ಅಂಜದಿ, ಅಬ್ದುರ್ರಹ್ಮಾನ್, ಸಫ್ವಾನ್ ಕೌನ್ಸಿಲನ್ನು ನಿಯಂತ್ರಿಸಿದರು. 

ಶಿಹಾಬ್ ಮಡಿವಾಳ ವರದಿ ಮಂಡಿಸಿದರು. ಸಫ್ದರ್ ಹುಸೈನ್ ಕ್ಯಾಂಪಸ್ ವರದಿಯನ್ನು, ಶಾಫಿ ಸಅದಿ ಖರ್ಚು ವೆಚ್ಚಗಳ ವರದಿ ಮಂಡಿಸಿದರು. ಶಬೀಬ್ ಎವಿ ಸ್ವಾಗತ ಭಾಷಣ ಮಾಡಿದರು. ಶರೀಫ್ ಬೆಂಗಳೂರು ತರಗತಿ ನಡೆಸಿದರು. ಅಖ್ತರ್ ಹುಸೈನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News