ಅಬ್ದುಲ್ ಖಾದರ್

Update: 2021-01-31 13:07 GMT

ಮಂಗಳೂರು: ಮುಸ್ಲಿಂ ಸೆಂಟ್ರಲ್ ಕಮಿಟಿ ಇದರ ಸದಸ್ಯ ಅಬ್ದುಲ್ ಖಾದರ್ (ಇಂಜಿನಿಯರ್) ತುಂಬೆ ಅವರು ಅಲ್ಪಕಾಲದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 51ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಅಬ್ದುಲ್ ಖಾದರ್ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷರಾದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್, ಉಪಾಧ್ಯಕ್ಷರಾದ ಹಾಜಿ ಸಿ. ಮಹಮೂದ್, ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಅಹ್ಮದ್ ಭಾಷ ತಂಙಳ್, ಹಾಜಿ ಇಮ್ತಿಯಾಝ್ ಅಹ್ಮದ್ ಕಾರ್ಕಳ, ಬಾಷ ಸಾಹೇಬ್ ಕುಂದಾಪುರ, ಕೆ. ಅಶ್ರಫ್, ಹಾಜಿ ಬಿ.ಎಂ. ಮುಮ್ತಝ್ ಅಲಿ, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಖಜಾಂಜಿ ಹಾಜಿ ಮೂಸಾ ಮೊಹಿದಿನ್,  ಬಿ. ಅಬೂಬಕ್ಕರ್, ಸಿ.ಎಂ. ಹನೀಫ್, ಸಿ.ಎಂ. ಮುಸ್ತಫ, ಹಾಜಿ ರಿಯಾಝುದ್ಧೀನ್, ಡಿ.ಎಂ ಅಸ್ಲಂ, ಎಂ.ಎ. ಅಶ್ರಫ್, ಅಹ್ಮದ್ ಬಾವ ಪಡೀಲ್, ಮೊಯಿದಿನ್ ಮೋನು, ಅಹ್ಮದ್ ಬಾವ ಬಜಾಲ್ ಮೊದಲಾದವರು ಸಂತಾಪ ಸೂಚಿಸಿದ್ಧಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ