ಹಾಜಿ ಅಬ್ದುಲ್ ಖಾದರ್

Update: 2021-02-15 15:23 GMT

ಮಂಗಳೂರು, ಫೆ.15: ಮಂಗಳೂರು ಸೀಫುಡ್ ಬೈಯರ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಹಾಗೂ ಭಾರತ್ ಸೀಫುಡ್‌ನ (ಬಿಎಸ್‌ಎಫ್) ಮಾಲಕರೂ ಆದ ಹಾಜಿ ಅಬ್ದುಲ್ ಖಾದರ್ (78) ಅಲ್ಪಕಾಲದ ಅಸೌಖ್ಯದಿಂದ ನಗರದ ಬೋಳಾರದ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು.

ಮೃತರು ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ್ ಕಾರ್ಯವು ನಗರದ ನಡುಪಳ್ಳಿ ಜುಮ್ಮಾ ಮಸೀದಿ ವಠಾರದಲ್ಲಿ ಸಂಜೆ ವೇಳೆ ನೆರವೇರಿತು.

ಸಂತಾಪ: ಹಾಜಿ ಅಬ್ದುಲ್ ಖಾದರ್ ಅವರ ನಿಧನಕ್ಕೆ ಸೀಫುಡ್ ಬೈಯರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ