ಬಂಗಾಳ ಚುನಾವಣೆ ಹಿನ್ನೆಲೆ: ಸತ್ಯಜಿತ್ ರೇ ಪ್ರಶಸ್ತಿ ಘೋಷಿಸಿದ ಕೇಂದ್ರ ಸರಕಾರ

Update: 2021-02-23 03:42 GMT

ಕೊಲ್ಕತ್ತಾ, ಫೆ.23: ಖ್ಯಾತ ಚಿತ್ರ ನಿರ್ಮಾಪಕ ಸತ್ಯಜಿತ್ ರೇ ಹೆಸರಿನಲ್ಲಿ ರಾಷ್ಟ್ರಮಟ್ಟದ ಚಲನಚಿತ್ರ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಿಸಿದ್ದಾರೆ.

ಕೊಲ್ಕತ್ತಾದಲ್ಲಿ ನಡೆದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ)ದ ಸಮಾರಂಭದಲ್ಲಿ ಜಾವ್ಡೇಕರ್ ಈ ಘೋಷಣೆ ಮಾಡಿದರು ಎಂದು ಸಮಾರಂಭದಲ್ಲಿ ಪಾಲ್ಗೊಂಡ ನಟರೊಬ್ಬರು ವಿವರಿಸಿದ್ದಾರೆ.

ಸಮಾರಂಭಕ್ಕೆ ಮಾಧ್ಯಮಗಳಿಗೆ ಪ್ರವೇಶ ಇರಲಿಲ್ಲ. ಮುಂದಿನ ಎಪ್ರಿಲ್-ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಮುಂಚೂಣಿ ನಟರು ಮತ್ತು ನಿರ್ದೇಶಕರ ಜತೆ ಚರ್ಚೆ ನಡೆಸಿದರು. ಸತ್ಯಜಿತ್ ರೇ ಪ್ರಶಸ್ತಿಯ ವಿವರಗಳು ಲಭ್ಯವಿಲ್ಲ.

ರೇ ಹೆಸರಿನಸಲ್ಲಿ ಪ್ರಶಸ್ತಿ ಆರಂಭಿಸುತ್ತಿರುವುದು ಅವರಿಗೆ ನೀಡುವ ಅತ್ಯುನ್ನತ ಗೌರವ ಎಂದು ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News