ಊರಿಗೆ ಹೋದ ಸಿಆರ್‍ಪಿಎಫ್ ಪೇದೆ ವಾಪಸ್ ಬಂದಿಲ್ಲ ಎಂದು ದೂರು ನೀಡಿದ ಪತ್ನಿ

Update: 2021-03-11 13:01 GMT

ಬೆಂಗಳೂರು, ಮಾ.11: ಮದುವೆಯಾಗಿ ಊರಿಗೆ ಹೋದ ಸಿಆರ್‍ಪಿಎಫ್ ಪೇದೆಯೊಬ್ಬರು ಮತ್ತೆ ಮನೆಗೆ ವಾಪಸ್ ಬಂದಿಲ್ಲ ಎಂದು ಆರೋಪಿಸಿ ಪತ್ನಿ ಇಲ್ಲಿನ ನಂದಗುಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರ ಗ್ರಾಮದ ಯುವತಿ ಅನುಜಾ ಎಂಬಾಕೆ ದೂರು ಸಲ್ಲಿಕೆ ಮಾಡಿದ್ದು, ಇದೇ ಗ್ರಾಮದ ಪ್ರಮೋದ್ ಎಂಬಾತ ನಾಪತ್ತೆಯಾಗಿರುವ ಸಿಆರ್‍ಪಿಎಫ್ ಪೇದೆ ಎಂದು ತಿಳಿದುಬಂದಿದೆ.

ಈ ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಫೆ.19 ರಂದು ಅನುಜಾ ಜತೆ ಯಲಹಂಕದ ಸಿಆರ್‍ಪಿಎಫ್ ಕ್ಯಾಂಪಸ್‍ನಲ್ಲೇ ಪ್ರಮೋದ್ ಮದುವೆಯಾಗಿದ್ದಾನೆ. ತದನಂತರ, ತಾಯಿಗೆ ಹುಷಾರಿಲ್ಲ ಎಂದು ಹೇಳಿ ಪ್ರಮೋದ್ ತಂದೆ ಮತ್ತು ಸಹೋದರನನ್ನು ಕರೆದೊಯ್ದಿದ್ದರು. ಆದರೆ, ಇದುವರೆಗೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೊಬೈಲ್ ಮೂಲಕ ಸಂಪರ್ಕಿಸಿದರೆ, ಪ್ರಮೋದ್ ಪಾಲಕರು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ ಎಂದು ಅನುಜಾ ದೂರಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಸಂತ್ರಸ್ತೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News