ಕೆ.ನಾಗೇಶ್ ಕಿಣಿ
Update: 2021-03-15 13:12 GMT
ಉಡುಪಿ, ಮಾ.15: ಕಡಿಯಾಳಿಯ ಹಿರಿಯ ಸಮಾಜಸೇವಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನ ಆಡಳಿತ ಸಮಿತಿಯ ಮಾಜಿ ಸದಸ್ಯ ಹಾಗೂ ಹಿರಿಯ ಹೊಟೇಲ್ ಉದ್ಯಮಿ ಕುಕ್ಕುಂದೂರು ನಾಗೇಶ್ ಕಿಣಿ (93) ಇಂದು ನಿಧನರಾದರು.
ನಾಗೇಶ್ ಕಿಣಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಸಹಿತ ಐವರು ಪುತ್ರರು ಹಾಗೂ ಆರು ಮಂದಿ ಪುತ್ರಿಯರನ್ನು ಅಗಲಿದ್ದಾರೆ. ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಿಣಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ.