ಸ್ನೇಹಿತರ ಜೊತೆ ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

Update: 2021-04-05 11:42 GMT

ಬೆಂಗಳೂರು, ಎ.5: ಸ್ನೇಹಿತರ ಜೊತೆ ಈಜಲು ಹೋದ ಬಾಲಕನೋರ್ವ ಕಲ್ಲುಕ್ವಾರಿಯ ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದೇವನಹಳ್ಳಿಯ ಜ್ಯೋತಿಪುರದ ಬಳಿ ವರದಿಯಾಗಿದೆ.

ಇಲ್ಲಿನ ಬೈರದೇನಹಳ್ಳಿಯ ಯಲ್ಲಪ್ಪ(16) ಎಂಬ ಬಾಲಕ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

ಜ್ಯೋತಿಪುರದ ರಾಜೀವ್ ನಗರ ಸಮೀಪದ ಕಲ್ಲುಕ್ವಾರಿಯ ಕುಂಟೆಯಲ್ಲಿ ಈಜಲು ರವಿವಾರ ಐವರು ಬಾಲಕರು ಹೋಗಿದ್ದಾರೆ. ಅವರ ಜೊತೆಗಿದ್ದ ಯಲ್ಲಪ್ಪ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಉಳಿದವರು ಆತನ ರಕ್ಷಣೆಗೆ ಪ್ರಯತ್ನ ಮಾಡಿದರೂ ವಿಫಲವಾಗಿದೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಯಲ್ಲಪ್ಪನ ಮೃತದೇಹವನ್ನು ಹೊರತೆಗೆದಿದ್ದಾರೆ.

ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News