ಈಜುಕೊಳ ಪುನರಾರಂಭಕ್ಕೆ ಆಗ್ರಹಿಸಿ ಧರಣಿ

Update: 2021-04-05 13:00 GMT

ಬೆಂಗಳೂರು, ಎ.5: ರಾಜ್ಯ ಸರಕಾರ ಈ ಕೂಡಲೇ ಬೆಂಗಳೂರು ವ್ಯಾಪ್ತಿಯಲ್ಲಿನ ಈಜುಕೊಳ ಪುನರಾರಂಭ ಮಾಡಲು ಮುಂದಾಗಬೇಕೆಂದು ಆಗ್ರಹಿಸಿ ರಾಜ್ಯ ಈಜು ಸಂಸ್ಥೆಯ ಸದಸ್ಯರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಕಂಠೀರವ ಕ್ರೀಡಾಂಗಣದ ಬಳಿ ಜಮಾಯಿಸಿದ ಸದಸ್ಯರು, ಕೋವಿಡ್ ಸೋಂಕು ಹರಡುವ ಹಿನ್ನೆಲೆಯಲ್ಲಿ ರದ್ದುಗೊಳಿಸಿರುವ ಈಜುಕೊಳಗಳ ಪುನರಾರಂಭಕ್ಕೆ ರಾಜ್ಯ ಸರಕಾರ ಕೂಡಲೇ ಅನುಮತಿ ನೀಡಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಈಜು ಸಂಸ್ಥೆಯ ಕಾರ್ಯದರ್ಶಿ ಸತೀಶ್‍ ಕುಮಾರ್, ಈಜುಕೊಳಗಳ ಪುನರಾರಂಭಕ್ಕೆ ರಾಜ್ಯ ಸರಕಾರ ಕೂಡಲೇ ಅನುಮತಿ ನೀಡಬೇಕು. ಮದ್ಯದಂಗಡಿಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿ ಮಾಡಲು ಹಾಗೂ ಜಿಮ್‍ಗಳಲ್ಲಿ ಶೇ 50ರಷ್ಟು ಅವಕಾಶ ನೀಡಲಾಗಿತ್ತು. ಈಜುಕೊಳಗಳನ್ನು ಏಕೆ ರದ್ದು ಮಾಡಿದೆ ಎಂದು ಪ್ರಶ್ನಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News