ಬಸ್ ತಡೆದು ಚಾಲಕನಿಗೆ ಹಲ್ಲೆ ಪ್ರಕರಣ: ಬಿಎಂಟಿಸಿ ನಿರ್ವಾಹಕಿ ಸೇರಿ ಐವರು ಮಹಿಳೆಯರ ಬಂಧನ

Update: 2021-04-13 13:53 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.13: ಬಿಎಂಟಿಸಿ ಬಸ್ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಾಹಕಿ ಸೇರಿ ಐವರು ಮಹಿಳೆಯರನ್ನು ನೆಲಮಂಗಲ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಅರಿಶಿನಕುಂಟೆ ಬಳಿ ಬಸ್ ತಡೆದು ಈ ಮಹಿಳೆಯರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತದನಂತರ, ಪೊಲೀಸ್ ಸಿಬ್ಬಂದಿ, ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಪ್ರಕರಣ ದಾಖಲಾಗಿತ್ತು.

ರವಿವಾರ ವಿಚಾರಣೆ ನಡೆಸಿದ ಪೊಲೀಸರು ಪೀಣ್ಯ ಘಟಕದ ನಿರ್ವಾಹಕಿ ಕುಸುಮಾ ಹಾಗೂ ಸವಿತಾ, ಗೀತಾ, ಅನ್ನಪೂರ್ಣ, ಸುನಿತಾ ಎಂಬವರನ್ನು ವಶಕ್ಕೆ ತೆಗೆದುಕೊಂಡು ನೆಲಮಂಗಲ ಜೆಎಂಎಫ್​ಸಿ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಎ. 24ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News