ಜೋಸೆಫ್ ಕ್ರಾಸ್ತಾ

Update: 2021-04-22 16:07 GMT

ಮಂಗಳೂರು, ಎ.22: ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಪೇರಂತೊಟ್ಟಿ ನಿವಾಸಿ ಪ್ರಗತಿಪರ ಕೃಷಿಕ ಜೋಸೆಫ್ ಕ್ರಾಸ್ತಾ (87) ಅಸೌಖ್ಯದಿಂದ ಗುರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಉದಯವಾಣಿಯ ಉಪ ಮುಖ್ಯವರದಿಗಾರ ಹಿಲರಿ ಕ್ರಾಸ್ತಾ ಮತ್ತು ಕಾಸಿಯಾ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಎರಿಕ್ ಕ್ರಾಸ್ತಾ ಸಹಿತ 6 ಮಂದಿ ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದ ಅವರು ಕೇರಳ ಸರಕಾರದ ಆಕರ್ಷಕ ಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ