ಅಬ್ದುಲ್ ಖಾದರ್

Update: 2021-04-25 15:58 GMT

ಉಳ್ಳಾಲ ಮಂಡಲ ಪಂಚಾಯತ್ ಸದಸ್ಯ, ಉಳ್ಳಾಲ ಕೋಡಿ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ, ಜನತಾದಳದ ಮಾಜಿ ಮಂಡಲ ಸಮಿತಿ ಅಧ್ಯಕ್ಷ  ಅಬ್ದುಲ್ ಖಾದರ್ 'ಕಿಡಾವಾಕ', (68) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.

ಮೃತರು ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಕಾಂಗ್ರೆಸ್ ಜಿಲ್ಲಾ ವಕ್ತಾರ ಫಾರೂಕ್ ಉಳ್ಳಾಲ್, ಜನತಾದಳ ನಾಯಕರುಗಳಾದ ಅಕ್ಬರ್ ಉಳ್ಳಾಲ್, ನಝೀರ್ ಉಳ್ಳಾಲ್, ಗಂಗಾಧರ್ ಉಳ್ಳಾಲ್, ಅಝೀಝ್ ಹಾಜಿ ಅಝಾದ್ ನಗರ, ಹುಸೈನಾರ್ ಸುಂದರಿಬಾಗ್, ಬಶೀರ್ ಗುಂಡಿ ಹಿತ್ಲು,  ಕೌನ್ಸಿಲರ್ ಗಳಾದ ದಿನಕರ್ ಉಳ್ಳಾಲ್, ಖಲೀಲ್ ಉಳ್ಳಾಲ್, ಅಬ್ದುಲ್ ಜಬ್ಬಾರ್ ಅಬ್ದುಲ್ ಬಶೀರ್, ಮುಖಂಡ ಕೆ.ಎಸ್.ಮೊಯ್ದಿನ್,  ಬಶೀರ್ ಇಸ್ಮಾಯಿಲ್, ಮುನೀರ್ ಮುಕಚೇರಿ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ