ಅಬೂಬಕರ್ ಮದನಿ

Update: 2021-05-09 16:59 GMT

ಉಳ್ಳಾಲ: ಮೂಲತಃ ವಿಟ್ಲ ಸೇರಾಜೆ ಕಡಂಬುವಿನ, ಪ್ರಸ್ತುತ ಉಳ್ಳಾಲ ಅಕ್ಕರೆಕರೆ ನಿವಾಸಿಯಾಗಿರುವ   ಅಬೂಬಕರ್ ಮದನಿ ರವಿವಾರ ನಿಧನರಾದರು.

 ಮೃತರು ಉಳ್ಳಾಲ ಕೋಡಿ ಜುಮ್ಮಾ ಮಸೀದಿಯ ಖತೀಬರಾಗಿ ಹಾಗೂ ಉಳಾಲ ಪೇಟೆ, ಮೇಲಂಗಡಿ ಮೊಹಲ್ಲ ಮದ್ರಸಗಳ ಸಹಿತ ಉಳ್ಳಾಲದ ಬಹುತ್ತೇಕ ಮೊಹಲ್ಲಗಳ ಮದ್ರಸಗಳಲ್ಲಿ ಹಿರಿಯ ಅಧ್ಯಾಪಕರಾಗಿಯೂ  ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು  ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್  ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ