ಎಂ.ಚಂದ್ರಶೇಖರ್ ಶೆಟ್ಟಿ

Update: 2021-05-10 17:16 GMT

ಉಡುಪಿ, ಮೇ 10: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿ ನಿವೃತ್ತ ಆಡಳಿತಾಧಿಕಾರಿ ಎಂ.ಚಂದ್ರಶೇಖರ್ ಶೆಟ್ಟಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಛೇರಿಯ ನಿವೃತ್ತ ಆಡಳಿತಾಧಿಕಾರಿ ಎಂ.ಚಂದ್ರಶೇಖರ್ ಶೆಟ್ಟಿ (63) ಅವರು ಸೋಮವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.

ನಿವೃತ್ತಿಯ ಬಳಿಕ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಿರ್ವಹಿಸುತಿದ್ದ ಇವರು ಮೂಲತ: ಕೊಕ್ಕರ್ಣೆ ಬೈದೆಬೆಟ್ಟು ಸಮೀಪದ ಮೈಯಾರು ಮಕ್ಕಿಯವರು. ಪ್ರಸ್ತುತ ಉಡುಪಿಯಲ್ಲಿ ವಾಸವಾಗಿದ್ದರು. ಕೊರೋನ ಸೋಂಕಿಗೆ ಪಾಸಿಟಿವ್ ಬಂದಿದ್ದ ಚಂದ್ರಶೇಖರ್ ಶೆಟ್ಟಿ, ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದರು. ಇವರು ಪತ್ನಿ, ಇಬ್ಬರು ಪುತ್ರಿಯ ರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ