ಬೆಂಗಳೂರು: ಕುತ್ತಿಗೆಗೆ ಕಚ್ಚಿದ ನಾಯಿ; ತೀವ್ರ ರಕ್ತಸ್ರಾವದಿಂದ ಗಾರೆ ಕೆಲಸಗಾರ ಮೃತ್ಯು

Update: 2021-05-12 16:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 12: ಕುತ್ತಿಗೆಗೆ ಬಲವಾಗಿ ನಾಯಿ ಕಚ್ಚಿದ್ದರಿಂದ ಗಾರೆ ಕೆಲಸಗಾರನೊಬ್ಬ ಸಾವನ್ನಪ್ಪಿರುವ ಘಟನೆ ಯಲಹಂಕ ಉಪನಗರದ ಅಟ್ಟೂರು ಲೇಔಟ್‍ನಲ್ಲಿ ಸಂಭವಿಸಿದೆ.

ಮೃತರನ್ನು ಅಟ್ಟೂರು ಲೇಔಟ್‍ನ ನರಸಿಂಹ ಎಂದು ಗುರುತಿಸಲಾಗಿದೆ. ಅಟ್ಟೂರು ಲೇಔಟ್‍ನಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಪಕ್ಕದ ಮನೆಯ ಮಹಿಳೆಯೊಬ್ಬರು ನಾಯಿಯನ್ನು ಕರೆದುಕೊಂಡು ವಾಯುವಿಹಾರಕ್ಕೆ ಹೋಗುತ್ತಿದ್ದರು.

ಈ ಸಂದರ್ಭ ಆಕೆಯಿಂದ ತಪ್ಪಿಸಿಕೊಂಡ ನಾಯಿ ಗಾರೆ ಕೆಲಸಗಾರ ನರಸಿಂಹನ ಕುತ್ತಿಗೆ ಕಚ್ಚಿದ್ದು, ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ನರಸಿಂಹನ ಮೃತದೇಹವನ್ನು ಯಲಹಂಕ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿರುವ ಯಲಹಂಕ ಉಪನಗರ ಪೊಲೀಸರು, ನಾಯಿಯ ಮಾಲಕರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News