ಡಾ.ಸುಧೀರ್ ಶೆಟ್ಟಿ ವರ್ವಾಡಿ
Update: 2021-05-14 12:13 GMT
ಮಣಿಪಾಲ, ಮೇ 14: ಖ್ಯಾತ ದಂತವೈದ್ಯ ಡಾ.ಸುಧೀರ್ ಶೆಟ್ಟಿ ವರ್ವಾಡಿ (70) ಕಳೆದ ಸೋಮವಾರ ಮಣಿಪಾಲದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ, ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ಸರಕಾರಿ ಆಸ್ಪತ್ರೆಯಲ್ಲಿ ಮೂರು ದಶಕಗಳ ಕಾಲ ದಂತ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ಶೆಟ್ಟಿ, ನಿವೃತ್ತಿಯ ಬಳಿಕ ಮಣಿಪಾಲದ ಅನಂತ ನಗರದಲ್ಲಿ ದಂತ ಚಿಕಿತ್ಸಕರಾಗಿ ಪ್ರಾಕ್ಟೀಸ್ ನಡೆಸುತಿದ್ದರು.