ಕೋಟ ರಾಮಚಂದ್ರ ಆಚಾರ್ಯ

Update: 2021-05-14 16:16 GMT

ಉಡುಪಿ, ಮೇ 14: ನಾಡಿನ ಪ್ರಸಿದ್ಧ ತಾಂತ್ರಿಕ ಶಿಲ್ಪಿ ಎಂದು ಹೆಸರಾದ ಕೋಟ ರಾಮಚಂದ್ರ ಆಚಾರ್ಯ (59) ಇವರು ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

2015ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ ರಾಗಿದ್ದ ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕಾಸರಗೋಡು ಹಾಗೂ ಇತರೆ ಜಿಲ್ಲೆಗಳ ದೇವಳಗಳ ಧ್ವಜಮರ ನಿಲ್ಲಿಸುವ ಕಾರ್ಯದಲ್ಲಿ ಇವರು ಸಿದ್ಧಹಸ್ತರಾಗಿದ್ದರು. ರಾಜ್ಯದ ನೂರಕ್ಕೂ ಅಧಿಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ರಾಮಚಂದ್ರ ಆಚಾರ್ಯರ ನಿಧನಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ