ಭುಜಂಗ ಆಚಾರ್ಯ

Update: 2021-05-21 16:34 GMT

ಶಿರ್ವ, ಮೇ 21: ಕಳೆದ 40ವರ್ಷಗಳಿಂದ ವೆಲ್ಡಿಂಗ್ ಉದ್ಯಮ ನಡೆಸುತ್ತಿದ್ದ ವಿಶ್ವಕರ್ಮ ಸಮಾಜದ ಮುಂದಾಳು, ಮೂಲತ: ಇನ್ನಂಜೆಯ ಭುಜಂಗ ಆಚಾರ್ಯ (63) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.

ಇವರು ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಕಟಪಾಡಿ ಶ್ರಿಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಳದ ಧರ್ಮದರ್ಶಿಗಳಾದ ನವೀನ್ ಆಚಾರ್ಯ ಪಡುಬಿದ್ರಿ, ಶೇಖರ ಆಚಾರ್ಯ ಕಾಪು, ವಿಶ್ವಬ್ರಾಹ್ಮಣ ಯುವ ಸಂಘಟನೆ ಕಾಪು ಕ್ಷೇತ್ರದ ಮಹಾಪೋಷಕ ಅಲೆವೂರು ಯೋಗೀಶ ಆಚಾರ್ಯ, ಗೌರವಾಧ್ಯಕ್ಷ ಸದಾಶಿವ ಆಚಾರ್ಯ ಪಡುಬಿದ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ