ತಾನು ಕೂಡಿಟ್ಟ ಹಣವನ್ನು ಕೋವಿಡ್ ಪರಿಹಾರ ನಿಧಿಗೆ ನೀಡಿದ ಬಾಲಕ

Update: 2021-05-30 13:00 GMT

ಬೆಂಗಳೂರು, ಮೇ 30: ತಾನು ಉಳಿತಾಯ ಮಾಡಿದ್ದ 4,190 ರೂ.ಗಳನ್ನು ಮಾಯಾಂಕ್ ಎಂಬ 12 ವರ್ಷದ ಬಾಲಕ ಕೊರೊನ ಸೋಂಕಿತರಿಗೆ ನೆರವಾಗಲು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಿದ್ದಾನೆ.

ಬಾಲಕನ ತಂದೆ ಅಭಿನಂದನ್, ತಾಯಿ ಸ್ವಪ್ನ ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಚಿಕ್ಕಬಾಣಾವರದ ಎಡಿಫೈಸ್ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ಮಾಧ್ಯಮಗಳಲ್ಲಿ ಕೊರೊನ ಸೋಂಕಿತರ ಸಂಕಷ್ಟ ನೋಡಿ, ತನ್ನ ಕೈಲಾದ ಸಹಾಯ ಮಾಡಲು ಮುಂದಾದ ಈ ಬಾಲಕ ತಾನು 4 ವರ್ಷಗಳಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ 4,190 ರೂ.ಹಣವನ್ನು ಬೆಂಗಳೂರು ನಗರ ಜಿಲ್ಲಾ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮೂಲಕ `ಮುಖ್ಯಮಂತ್ರಿ ಕೋವಿಡ್ ಪರಿಹಾರ ನಿಧಿ'ಗೆ ದೇಣಿಗೆ ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News