ರೆಮಿಜಿಯಸ್ ಸಿ.ಎಂ.ಆರಾನ್ಹಾ

Update: 2021-05-30 16:42 GMT

ಮಂಗಳೂರು, ಮೇ 30: ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಗುರು ವಂ.ರೆಮಿಜಿಯಸ್ ಸಿ.ಎಂ. ಆರಾನ್ಹಾ (75) ರವಿವಾರ ನಿಧನರಾದರು.

1945ರಲ್ಲಿ ಮುಲ್ಕಿಯಲ್ಲಿ ಜನಿಸಿದ ಅವರು 1973ರಲ್ಲಿ ಮಂಗಳೂರು ಧರ್ಮಪ್ರಾಂತದ ಧರ್ಮಗುರುವಾಗಿ ದೀಕ್ಷೆ ಪಡೆದರು. ಸಹಾಯಕ ಧರ್ಮಗುರುವಾಗಿ ಪುತ್ತೂರು, ಆಡಳಿತಾಧಿಕಾರಿಯಾಗಿ ವರ್ಕಾಡಿ, ಹಾಗೂ ಪ್ರಧಾನ ಗುರುಗಳಾಗಿ ಉಕ್ಕಿನಡ್ಕ, ಕಾಟಿಪಳ್ಳ ,ಬಸ್ರೂರು, ಮೊಗರ್ನಾಡು, ಕಣಾಜಾರು, ಬಾರ್ಕುರು, ಪೆಜಾರ್ (ಕಳವಾರು), ಬಜಾಲ್ ಚರ್ಚುಗಳಲ್ಲಿ ಸೇವೆ ಸಲ್ಲಿಸಿದ್ದರು.

ನಿವೃತ್ತಿಯ ನಂತರ ಜೆಪ್ಪುವಿನ ವಿಶ್ರಾಂತ ಧರ್ಮಗುರುಗಳ ನಿವಾಸದಲ್ಲಿ ವಾಸಿಸುತ್ತಿದ್ದರು. ಅವರ ಅಂತಿಮ ಕ್ರಿಯೆಯು ವೆಲೆನ್ಸಿಯಾ ಚರ್ಚ್‌ನಲ್ಲಿ ಮೇ 31ರಂದು ಬೆಳಗ್ಗೆ 10ಗಂಟೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ನಿವೃತ್ತ ಧರ್ಮಗುರು ರೆಮಿಜಿಯಸ್ ಅವರ ನಿಧನಕ್ಕೆ ಮಂಗಳೂರು ಬಿಷಪ್ ಅ.ವಂ. ಡಾ. ಪೀಟರ್ ಪಾವ್ಲೃ್ ಸಲ್ಡಾನ್ಹಾ, ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತದ ಕ್ರೈಸ್ತರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ