ಹರೀಶ್ ಕುಮಾರ್ ಶೆಟ್ಟಿ

Update: 2021-06-01 16:51 GMT

ಮಂಗಳೂರು : ಕರ್ನಾಟಕ ಸರಕಾರ ಮತ್ತು ಭಾರತ ಸರಕಾರದ ಕಾರ್ಮಿಕ ವಿಮಾ ಆಸ್ಪತ್ರೆ (ಇಎಸ್ ಐ ಆಸ್ಪತ್ರೆ )ಮಂಗಳೂರು ಇದರ ಕುಂದು ಕೊರತೆ ಸಮಿತಿಯ ಸದಸ್ಯರಾಗಿದ್ದ ಬಂಟ್ವಾಳ ತಾಲೂಕಿನ ಜಕ್ರಿ ಬೆಟ್ಟುವಿನ ನಿವಾಸಿ ಹರೀಶ್ ಕುಮಾರ್ ಶೆಟ್ಟಿ (63)ಸೋಮವಾರ ರಾತ್ರಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಉಸಿರಾಟದ ತೊಂದರೆ ಗೊಳಗಾದ ಹರೀಶ್ ಕುಮಾರ್ ಶೆಟ್ಟಿ ಯವರು ನಗರದ ವೆನ್ ಲಾಕ್ ಜಿಲ್ಲಾ ಆಸ್ಪತ್ರೆ ಯಲ್ಲಿ ಬುಧವಾರ ದಾಖಲಾಗಿ ಕೋವಿಡ್ ಸೋಂಕು ಪರೀಕ್ಷೆ ಗೆ ಹಾಜರಾದಾಗ ಅವರಿಗೆ ಸೋಂಕು ತಗುಲಿರು ವುದು ಖಚಿತ ಗೊಂಡಿದೆ. ಬಳಿಕ ದೇರಳ ಕಟ್ಟೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಗೆ ದಾಖಲಾಗಿದ್ದವರು.

ಸೋಮವಾರ ತಡರಾತ್ರಿ ಅಸ್ವಸ್ಥರಾದ ಬಳಿಕ ಚೇತರಿಸಿ ಕೊಳ್ಳದೆ ಹರೀಶ್ ಶೆಟ್ಟಿ ನಿಧನರಾದರು. ಮ್ರತರು ಓರ್ವ  ಪುತ್ರ ಮತ್ತ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ