ಬೆಂಗಳೂರು: ಉಚಿತ ಊಟ ನೀಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಗಂಭೀರ ಹಲ್ಲೆ; ಪ್ರಕರಣ ದಾಖಲು

Update: 2021-06-07 17:19 GMT

ಬೆಂಗಳೂರು, ಜೂ.7: ಲಾಕ್‌ಡೌನ್ ನಡುವೆಯೂ ಊಟ ತಲುಪಿಸುವ ಸ್ವಿಗ್ಗಿ ಡೆಲಿವರಿ ಯುವಕನನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ರಾಜಾಜಿನಗರದಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್ ಎಂಬಾತ ಸ್ವಿಗ್ಗಿ ಡೆಲಿವರಿ ಯುವಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಯುವಕರ ಗುಂಪೊಂದು ಊಟವನ್ನು ಆರ್ಡರ್ ಮಾಡಿದ್ದಾರೆ. ಆ ನಂತರ, ಆರ್ಡರ್ ರದ್ದುಗೊಳಿಸುವ ಕೆಲವೇ ಕ್ಷಣದಲ್ಲಿ ಕಾರ್ತಿಕ್, ಊಟದ ಜೊತೆಗೆ ಯುವಕರ ಮನೆ ಬಾಗಿಲಿಗೆ ತಲುಪಿದ್ದಾನೆ. ಆದರೆ, ಊಟ ಉಚಿತವಾಗಿ ನೀಡುವಂತೆ ಯುವಕರು ಜಗಳ ನಡೆಸಿ, ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News