ಪ್ರಧಾನಿ ಮೋದಿ ದೇಶದ ಮತ್ತು ಅವರ ಪಕ್ಷದ ʼಉನ್ನತʼ ನಾಯಕ: ಶಿವಸೇನೆಯ ಸಂಜಯ್ ರಾವತ್ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಮತ್ತು ಅವರ ಪಕ್ಷದ ಉನ್ನತ ನಾಯಕ ಎಂದು ಶಿವಸೇನೆಯ ಮುಖ್ಯಸ್ಥ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದಿಲ್ಲಿಯನ್ನು ಪ್ರಧಾನಿ ಮೋದಿಯನ್ನು ಮರಾಠ ಕೋಟಾ ವಿಚಾರದ ಕುರಿತು ಭೇಟಿಯಾದ ಬಳಿಕ ಸಂಜಯ್ ರಾವತ್ ರಿಂದ ಈ ಹೇಳಿಕೆ ಕೇಳಿ ಬಂದಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿಯ ಕುರಿತಾದಂತೆ ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ "ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಆದರೂ ನಮ್ಮ ಸಂಬಂಧ ಮುರಿದುಹೋಗಿದೆ ಎಂದಲ್ಲ" ಎಂದು ಉಲ್ಲೇಖಿಸಿದ್ದರು.
ಬಿಜೆಪಿ ಮತ್ತು ಆರೆಸ್ಸೆಸ್ ಕುರಿತಾದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್ ರಾವತ್ "ನಾನು ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಕಳೆದ ಏಳು ವರ್ಷಗಳಲ್ಲಿನ ಯಶಸ್ಸನ್ನು ಬಿಜೆಪಿಯು ನರೇಂದ್ರ ಮೋದಿಯವರಿಗೆ ನೀಡಬೇಕು. ಅವರು ಪ್ರಸ್ತುತ ದೇಶದ ಮತ್ತು ಅವರ ಪಕ್ಷದ ಉನ್ನತ ನಾಯಕರಾಗಿದ್ದಾರೆ" ಎಂದು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.