ಅಂತರಾಷ್ಟ್ರೀಯ ಕರೆಗಳ ಮಾರ್ಪಾಡು ಪ್ರಕರಣ: ಮತ್ತೆ ಐವರ ಬಂಧನ
Update: 2021-06-14 18:17 GMT
ಬೆಂಗಳೂರು, ಜೂ.14: ಅಂತರ್ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಂತೆ ಪರಿವರ್ತಿಸಿ ದೇಶದ ಭದ್ರತೆಗೆ ಕುತ್ತು ತಂದಿದ್ದ ಆರೋಪ ಪ್ರಕರಣ ಸಂಬಂಧ ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ(ಎಟಿಸಿ) ಕಾರ್ಯಾಚರಣೆ ನಡೆಸಿ ಮತ್ತೆ ಐವರನ್ನು ಬಂಧಿಸಿದ್ದಾರೆ.
ಕೇರಳ ಮಲ್ಲಪುರಂ ಮುಹಹಮ್ಮದ್ ಬಷೀರ್, ಅನೀಶ್ ಅತ್ತಿ ಮನ್ನೀಲ್, ತಮಿಳುನಾಡಿನ ತೂತುಕುಡಿ ನಿವಾಸಿ ಸಂತನ್ ಕುಮಾರ್, ಸುರೇಶ್ ತಂಗವೇಲು, ಜೈ ಗಣೇಶ್ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರ ವಿಚಾರಣೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.