ಮಂಟಪ ಗೋಪಾಲ ಉಪಾಧ್ಯ
Update: 2021-06-19 13:16 GMT
ಉಡುಪಿ, ಜೂ.19: ಜಿಲ್ಲೆಯ ಜನಪ್ರಿಯ ‘ಮಂಟಪ’ ಐಸ್ಕ್ರೀಮ್ನ್ನು ಪ್ರಾರಂಭಿಸಿದ್ದ ಸಾಲಿಗ್ರಾಮದ ಉದ್ಯಮಿ ಮಂಟಪ ಗೋಪಾಲ ಉಪಾಧ್ಯ ಇಂದು ಮುಂಜಾನೆ ಸಾಲಿಗ್ರಾಮದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 84 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕೋಟ, ಸಾಲಿಗ್ರಾಮ ಪರಿಸರದಲ್ಲಿ ಕಳೆದ ಶತಮಾನದ 60ರ ದಶಕದಲ್ಲಿ ಐಸ್ಕ್ಯಾಂಡಿ, ಐಸ್ಕ್ರೀಮ್ನ್ನು ಜನರಿಗೆ ಪರಿಚಯಿಸಿದವರು ಇವರು. ವಿವಿಧ ರುಚಿ, ಬಣ್ಣ, ಪ್ರಕಾರದ ಐಸ್ಕ್ಯಾಂಡಿ ಯನ್ನು ಸೈಕಲ್ನಲ್ಲಿ ಮಾರಾಟ ಮಾಡುವ ಮೂಲಕ ಅವರು ಕುಂದಾಪುರದಿಂದ ಬ್ರಹ್ಮಾವರದವರೆಗೂ ಐಸ್ಕ್ಯಾಂಡಿ ಹಾಗೂ ಐಸ್ಕ್ರೀಮ್ನ್ನು ಜನರಿಗೆ ಪರಿಚಯಿಸಿ ಜನಪ್ರಿಯಗೊಳಿಸಿದ್ದರು. ಅಲ್ಲದೇ ಅವರ ‘ಮಂಟಪ ಹೊಟೇಲ್’ ಸಹ ಪರಿಸರದಲ್ಲಿ ತುಂಬಾ ಖ್ಯಾತಿಯನ್ನು ಪಡೆದಿದೆ.