ಇಸ್ಮಾಯಿಲ್ ದೊಡ್ಡಮನಿ

Update: 2021-07-05 10:26 GMT

ಮುಂಡಗೋಡ : ಉದ್ಯಮಿ ಇಸ್ಮಾಯಿಲ್ ದೊಡ್ಡಮನಿ (43) ರವಿವಾರ ರಾತ್ರಿ ನಿಧನರಾಗಿದ್ದಾರೆ.

ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತರು ಅನ್ನಾಸಾಗರ ಎಂದೇ ಪ್ರಚಲಿತರಿದ್ದರು. ಮುಂಡಗೋಡ ಪಟ್ಟಣದ ನೆಹರು ನಗರ ನಿವಾಸಿಯಾಗಿದ್ದ ಇವರು  ಅಂಬೇಡ್ಕರ ಓಣಿಯಲ್ಲಿ ತಮ್ಮ ಉದ್ಯಮವನ್ನು ನಡೆಸುತ್ತಿದ್ದರು. ಸ್ನೇಹಮಯಿಯಾಗಿದ್ದ ಇವರು ಅಪಾರ ಸ್ನೇಹಿತರನ್ನು ಹೊಂದಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ