ಆನಂದ ಸಾರಂಗ
Update: 2021-07-12 15:43 GMT
ಕುಂದಾಪುರ, ಜು.12: ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ, ಕೊಂಕಣ ಖಾರ್ವಿ ಸಮಾಜದ ಧುರೀಣ, ಕಲಾವಿದ ಆನಂದ ಸಾರಂಗ (74) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಸಂಜೆ ನಿಧನರಾದರು. ಮತ್ಸೋದ್ಯಮಿಯಾಗಿ ಗುರುತಿಸಲ್ಪಡುತಿದ್ದ ಆನಂದ ಸಾರಂಗ ಪತ್ನಿ, ಓರ್ವ ಪುತ್ರಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಆನಂದ ಸಾರಂಗ್ ನಿಧನಕ್ಕೆ ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಿರಿಯಣ್ಣ, ಮಲ್ಯಾಡಿ ಶಿವರಾಂ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ಬಿ.ಹಾರೂನ್ ಸಾಹೇಬ್, ಸಾಮಾಜಿಕ ಕಾರ್ಯಕರ್ತ ಡೇವಿಡ್ ಸೀಕ್ವೆರಾ ಮುಂತಾದವರು ಕಂಬನಿ ಮಿಡಿದಿದ್ದಾರೆ.
ಮೃತರ ಅಂತಿಮ ಕ್ರಿಯೆಗಳು ಮಂಗಳವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.