ಮೋಹನ ಸ್ವಾಮೀಜಿ
Update: 2021-07-22 14:37 GMT
ಹೆಬ್ರಿ, ಜು.22: ಮುದ್ರಾಡಿ ಶ್ರೀಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಮೋಹನ್ ಸ್ವಾಮೀಜಿ (73) ಅರು ಜು.21ರ ರಾತ್ರಿ ನಿಧನರಾದರು.
ಮೃತರಿಗೆ ಪತ್ನಿ, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ, ರಂಗ ನಟ, ನಿರ್ದೇಶಕ ಸುಕುಮಾರ್ ಮೋಹನ್ ಸಹಿತ ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮುದ್ರಾಡಿಯಂಥ ಗ್ರಾಮೀಣ ಪ್ರದೇಶದಲ್ಲಿ ನಮ ತುಳುವೆರ್ ಎಂಬ ಸಂಘಟನೆಯ ಸಂಸ್ಥಾಪಕರಾಗಿ ರಾಷ್ಟ್ರಮಟ್ಟದಲ್ಲಿ ಮುದ್ರಾಡಿಯ ಹೆಸರನ್ನು ಗುರುತಿಸುವಂತೆ ಮಾಡಿದ್ದರು.