ಅರುಣ್ ಶಿರಾಲಿ
Update: 2021-07-22 14:38 GMT
ಉಡುಪಿ, ಜು. 22: ಉಡುಪಿಯ ಪ್ರಸಿದ್ಧ ಛಾಯಾಚಿತ್ರ ಕಲಾವಿದ ನಗರದ ಗುರುಕೃಪ-ಮಾಡರ್ನ್ ಸ್ಟುಡಿಯೋದ ಮಾಲಕ ಅರುಣ್ ಶಿರಾಲಿ (74) ಅವರು ಇತ್ತೀಚೆಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಛಾಯಾಗ್ರಹಣ ಕ್ಷೇತ್ರದಲ್ಲಿ ಐದು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಶಿರಾಲಿ, ವಿಶಿಷ್ಟ ಛಾಯಾಗ್ರಹಣಕ್ಕೆ ಹೆಸರಾಗಿದ್ದರು. ಮುಂಬೈ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಡಿಪ್ಲೋಮ ಪಡೆದಿದ್ದ ಅವರು ಉಡುಪಿಯ ಹಲವು ಐತಿಹಾಸಿಕ ಕ್ಷಣಗಳನ್ನು ತಮ್ಮ ಕೆಮರಾದಲ್ಲಿ ಸೆರೆ ಹಿಡಿದಿದ್ದರು. ಮಲ್ಪೆ ಬಂದರಿನಲ್ಲಿ ದಶಕಗಳ ಹಿಂದೆ ಸಂಭವಿಸಿದ್ದ ಬೋಟ್ ದುರಂತದ ಚಿತ್ರಗಳನ್ನು ಸಹ ಇವರು ಸೆರೆಹಿಡಿದಿದ್ದರು.