ಕೋಟೆ ಅಬ್ದುಲ್ಲಾ

Update: 2021-07-22 17:28 GMT

ಕುಂದಾಪುರ, ಜು.22: ಕೋಡಿ ಕೋಟೆ ಅಬ್ದುಲ್ಲಾ (71) ಬುಧವಾರ ರಾತ್ರಿ 9 ಗಂಟೆಗೆ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ಮಲಕ್ ಸಾಹೇಬ್’ ಎಂದೇ ಚಿರಪರಿಚಿತರಾಗಿದ್ದ ಇವರು, ಸಜ್ಜನ ವ್ಯಕ್ತಿತ್ವ, ಪರೋಪಕಾರಿ ಮನೋಭಾವದರಾಗಿದ್ದು, ಸದಾ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದರು. ಕೊಡುಗೈ ದಾನಿಯಾಗಿದ್ದ ಇವರು ಕೋಟೆ ಬದ್ರಿಯಾ ಜುಮಾ ಮಸೀದಿಯ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸಂತಾಪ: ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ, ಕೋಟ ಜನತಾ ಫಿಶ್ ಮಿಲ್ ಪ್ರಾಡಕ್ಟ್‌ ಮಾಲಕ ಹಾಗೂ ಅಬ್ದುಲ್ಲಾರ ಆಪ್ತಮಿತ್ರ ಆನಂದ್ ಸಿ. ಕುಂದರ್, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಪುರಸಭಾ ಸದಸ್ಯ ಮುಹಮ್ಮದ್ ಅಶ್ಫಾಕ್, ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಕೋಡಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ