ಶಿವಪ್ಪ ಅಟ್ಡೋಳೆ

Update: 2021-07-24 16:35 GMT

ಪುತ್ತೂರು: ದಲಿತ ಮುಖಂಡರಾದ ಪುತ್ತೂರು ತಾಲೂಕಿನ ಸವಣೂರು ನಿವಾಸಿ, ಉಳ್ಳಾಲ ಪುರಸಭಾ ಸಿಬ್ಬಂದಿ ಶಿವಪ್ಪ ಅಟ್ಡೋಳೆ(50) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಉಳ್ಳಾಲ ನಗರ ಸಭೆಯ ಸಿಬ್ಬಂದಿಯಾಗಿದ್ದ ಅವರು ಈ ಹಿಂದೆ ಪುತ್ತೂರು ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಉಳ್ಳಾಲ ನಗರಸಭೆಗೆ ವರ್ಗಾವಣೆಗೊಂಡಿದ್ದರು.

ದಲಿತ ಚಳವಳಿಯಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದ ಶಿವಪ್ಪ ಅಟ್ಟೋಳೆ ದಲಿತರ ಮತ್ತು ಶೋಷಿತರ ಪರವಾಗಿ ನಿರಂತರ ಹೋರಾಟ ನಡೆಸುತ್ತಿದ್ದರು. ಪುತ್ತೂರಿನಲ್ಲಿ ಅಹಿಂದ ಸಂಘಟನೆಯಲ್ಲಿ ಸಕ್ರಿಯರಾಗಿ ದುಡಿದಿರುವ ಅವರು ಅಹಿಂದ ಇದರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ