ಶೇಖ್ ಅಬ್ದುಲ್ ಹಮೀದ್

Update: 2021-07-25 18:16 GMT

ಮಂಗಳೂರು: ಬೋಳಾರ ಮೊಹ್ಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ಶೇಖ್ ಅಬ್ದುಲ್ ಹಮೀದ್ (86) ಅವರು ಅಲ್ಪಕಾಲದ ಅನಾರೋಗ್ಯ ದಿಂದ ಮಣಿಪಾಲದಲ್ಲಿ ರವಿವಾರ ರಾತ್ರಿ ನಿಧನರಾದರು.

ಅವರು ಮಂಗಳೂರಿನ ಸುಭಾಷ್ ನಗರದಲ್ಲಿ ವಾಸವಾಗಿದ್ದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧುಬಳಗವನ್ನು  ಅಗಲಿದ್ದಾರೆ.

ಬೋಳಾರ ಇಸ್ಲಾಮಿಕ್ ಸೆಂಟರ್ ಇದರ ಟ್ರಸ್ಟಿ ಕೂಡ ಆಗಿದ್ದ ಅವರು ಕೊಡುಗೈ ದಾನಿಯಾಗಿದ್ದರು. ಇವರ ನಿಧನಕ್ಕೆ ಬೋಳಾರ ಮಸೀದಿಯ ಸದಸ್ಯರು ಹಾಗೂ ಇಸ್ಲಾಮಿಕ್ ಸೆಂಟರ್ ಇದರ ಟ್ರಸ್ಟಿಗಳು ಸಂತಾಪ ಸೂಚಿಸಿದ್ದಾರೆ.

ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಮೃತದೇಹವು ಬೋಳಾರ ಜುಮಾ ಮಸೀದಿಗೆ ಬರಲಿದ್ದು, ಮಧ್ಯಾಹ್ನ ಝುಹ್ ರ್ ನಮಾಝ್ ನಂತರ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ