ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು ಭೇಟಿ

Update: 2021-07-28 05:19 GMT

ಬೆಂಗಳೂರು, ಜು.28: ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪರಿಗೆ ಸೂಕ್ತ ಸ್ಥಾನಮಾನ ನೀಡುವ ಸಂಬಂಧ ಇಂದು ಬೆಳಗ್ಗೆ ಬೆಂಗಳೂರಿನ ಈಶ್ವರಪ್ಪರ ನಿವಾಸದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಅವರನ್ನು ಭೇಟಿ ಮಾಡಿ ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.

ಈ ಸಂದರ್ಭದಲ್ಲಿ  ಶ್ರೀ ಶಾಂತಮಯ ಶಿವಾಚಾರ್ಯ (ರೇವಣಶಿದ್ದೇಶ್ವರ ಗುರುಪೀಠ ಸರೂರು), ಶ್ರೀ ಸೋಮಲಿಂಗೇಶ್ವರ ಸ್ವಾಮಿ (ಅಮೋಘಶ ಸಿದ್ದೇಶ್ವರ ಗುರುಪೀಠ ಮಕಣಾಪುರ), ಶ್ರೀ ಅಮರೇಶ್ವರ ಸ್ವಾಮಿಗಳು ಅಥಣಿ, ಶ್ರೀ  ಬಿಂದುಶೇಖರ ಒಡೆಯರು ತುಮಕೂರು, ಶ್ರೀ ಅಪ್ಪು ಒಡೇಯರು ಅರಿಕೇರಿ, ಶ್ರೀ  ಮಾಳಿಂಗರಾಯರು ಹುಲಜಂತಿ ಮಹಾಸ್ವಾಮಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News