ವಂಚನೆ ಆರೋಪ: ದೂರು ನೀಡಿದ ನಿರ್ದೇಶಕ

Update: 2021-07-28 15:52 GMT

ಬೆಂಗಳೂರು, ಜು.28: 50 ಲಕ್ಷ ರೂ.ವಂಚನೆಗೈದಿದ್ದಾರೆ ಎಂದು ಆರೋಪಿಸಿ ಇಲ್ಲಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರಿಗೆ ಸಿನೆಮಾ ನಿರ್ದೇಶಕ ಎ.ಎಂ.ಆರ್.ರಮೇಶ್ ದೂರು ಸಲ್ಲಿಕೆ ಮಾಡಿದ್ದಾರೆ.

ನಿರ್ಮಾಪಕ ಹಾಗೂ ವಿತರಕ ಮಹೇಶ್ ಕೊಠಾರಿ ಮತ್ತು ಖಾಸಗಿ ಮನರಂಜನಾ ವಾಹಿನಿ ಹಾಗೂ ಡಿಸ್ನಿ ಹಾಟ್ ಸ್ಟಾರ್ ಆ್ಯಪ್‍ನಿಂದ ನನಗೆ 50 ಲಕ್ಷ ರೂ.ವಂಚನೆ ನಡೆಸಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.

2013ರಲ್ಲಿ ಅಟ್ಟಹಾಸ ಚಿತ್ರವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರ ಮಾಡಲು ಮಹೇಶ್ ಕೊಠಾರಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.ಅದರಂತೆ ಚಿತ್ರ ತೆರೆಕಂಡ ಆರು ತಿಂಗಳ ಬಳಿಕ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಯಿತು. 

2018ರಲ್ಲಿ ಮಹೇಶ್ ಕೊಠಾರಿ ಇದೇ ಚಿತ್ರವನ್ನು ಒಟಿಟಿ ಪ್ಲಾಟ್ ಫಾರ್ಮ್‍ನಲ್ಲಿ ಬಿಡುಗಡೆ ಮಾಡುವ ಸಲುವಾಗಿ ಮಾತುಕತೆ ನಡೆಸಿದ್ದರು. ಜೊತೆಗೆ 50 ಲಕ್ಷಕ್ಕೆ ಮಾರಾಟ ಮಾಡುವುದಾಗಿ ನಂಬಿಸಿದ್ದರು. ಇದನ್ನು ನಂಬಿ ನಾನು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆ. ಆದರೆ, ನನ್ನ ಬಳಿ ಇಂಗ್ಲಿಷ್ ಸಬ್ ಟೈಟಲ್‍ಯಿರುವ ಚಿತ್ರದ ಹಾರ್ಡ್ ಡಿಸ್ಕ್ ನೀಡಿದ್ದೆ. ಬಳಿಕ ಒಟಿಟಿಯಲ್ಲಿ ಚಿತ್ರ ನೋಡಿದಾಗ ವಂಚಿಸಿರುವುದು ಬಯಲಿಗೆ ಬಂದಿದೆ ಎಂದು ರಮೇಶ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News