ನಾರಾಯಣ ನಾಯರಿ
Update: 2021-08-22 15:11 GMT
ಬ್ರಹ್ಮಾವರ, ಆ. 22: ಮಟಪಾಡಿ ನಿವಾಸಿ ನಾರಾಯಣ ನಾಯರಿ(98) ವಯೋಸಹಜ ಅಸೌಖ್ಯದಿಂದ ಆ.22ರಂದು ನಿಧನ ಹೊಂದಿದರು.
ಇವರು ನೀಲಾವರದಲ್ಲಿ ಅಂಚೆ ಇಲಾಖೇತರ ಪ್ಯಾಕರ್ ಆಗಿ, ಬಾರಕೂರು, ಬ್ರಹ್ಮಾವರದಲ್ಲಿ ಅಂಚೆ ಇಲಾಖೆಯ ಪ್ಯಾಕರ್ ಆಗಿ ಒಟ್ಟು 32 ವರ್ಷ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ಮಟಪಾಡಿಯ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದ ನಂದಿಕೇಶ್ವರನ ದರ್ಶನಪಾತ್ರಿಗಳಾಗಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದರು.
ಮೃತರು ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತೆ ಮೊಕ್ತೇಸರ ಗಿರೀಶ್ಚಂದ್ರ ಆಚಾರ್ಯ, ಮುಕ್ಕಾಲು ಶೆಟ್ಟರಾದ ಸರ್ವೋತ್ತಮ ಶೆಟ್ಟಿ ನೇತೃತ್ವದಲ್ಲಿ ನಾಯರಿಯವರಿಗೆ ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.