ಗೌರಿ-ಗಣೇಶ ಹಬ್ಬ ನಾಡಿನ ಜನರ ಕ್ಲೇಶ ಕಳೆದು ಹರುಷ ತರಲಿ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-09-10 12:05 GMT

ಬೆಂಗಳೂರು : ನಾಡಿನೆಲ್ಲೆಡೆ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ  ಜನತೆಗೆ ಹಾರ್ದಿಕ ಶುಭಾಶಯಗಳು ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸರಕಾರ ಗೊತ್ತುಪಡಿಸಿದ ನೀತಿ ಸಂಹಿತೆಯ ನಿಯಂತ್ರಣಗಳನ್ನು ನಾಗರಿಕರು, ಪಾಲಿಸುವುದರೊಂದಿಗೆ ಗಣೇಶೋತ್ಸವವನ್ನು ಸರಳತೆ ಹಾಗೂ ಶ್ರದ್ಧಾಭಕ್ತಿ ಗಳಿಂದ ಆಚರಿಸಲಿ ಎಂದು ಅವರು ತಿಳಿಸಿದ್ದಾರೆ.

ಗೌರಿ-ಗಣೇಶ ಹಬ್ಬವು ನಾಡಿನ ಜನರ ಕ್ಲೇಶ ಕಳೆದು ಹರುಷ ತರಲಿ  ಎಂದೂ ಸಚಿವರು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News