ಗೌರಿ- ಗಣೇಶ ಹಬ್ಬದ ಪ್ರಯುಕ್ತ ಸಚಿವ ಡಾ. ಅಶ್ವತ್ಥನಾರಾಯಣ ಪೂಜೆ

Update: 2021-09-10 06:33 GMT

ಬೆಂಗಳೂರು : ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ- ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಅವರು ಗೌರಿ- ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಎಂಟನೇ ಕ್ರಾಸ್‌ʼನಲ್ಲಿರುವ ಗಣಪತಿ ದೇಗುಲದಲ್ಲಿ ಪೂಜೆ ನೆರೆವೇರಿಸಿದರು. 

ಬೆಳಗ್ಗೆ ಪತ್ನಿ ಸಮೇತರಾಗಿ ದೇಗುಲಕ್ಕೆ ಬಂದ ಅವರು, ಪೂಜೆಯಲ್ಲಿ ಭಾಗಿಯಾದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ವಿಘ್ನನಿವಾರಕ ಗಣಪತಿ ಎಲ್ಲರ ವಿಘ್ನಗಳನ್ನು ನಿವಾರಿಸಿ ಕರುಣೆ ತೋರಲಿ. ಎಲ್ಲೆಡೆ ಕೊರೋನ ಮಾರಿ ತೊಲಗಲಿ ಎಂದು ಗಣಪನಲ್ಲಿ ಪ್ರಾರ್ಥನೆ ಮಾಡಿದ್ದಾಗಿ ಹೇಳಿದರು. ನಂತರ ಅವರು ಸುಬ್ರಹ್ಮಣ್ಯ ನಗರದ ಪಾಲಿಕೆ ಸದಸ್ಯರ ಕಚೇರಿಯಲ್ಲಿ ನಡೆದ ಗಣೇಶ ಚತುರ್ಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News