ಮಣೂರು ನರಸಿಂಹ ಅಡಿಗ

Update: 2021-09-15 13:47 GMT

ಉಡುಪಿ, ಸೆ.15: ಪ್ರಗತಿಪರ ಕೃಷಿಕ ಮಣೂರು ನರಸಿಂಹ ಅಡಿಗ (84) ಸೆ.14ರಂದು ಮುಂಜಾನೆ ನಿಧನಹೊಂದಿದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮಣೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರು, ಕೋಟ ಸಿಎ ಬ್ಯಾಂಕಿನ ಮಾಜಿ ನಿರ್ದೇಶಕರೂ ಅಗಿದ್ದ ನರಸಿಂಹ ಅಡಿಗ, ಪ್ರಗತಿಪರ ಕೃಷಿ ಕರೂ ಆಗಿದ್ದರು. ಮಣೂರಿನಲ್ಲಿ 1983ರಲ್ಲೇ ಶುಭ ಡೈರಿ ಸ್ಥಾಪಿಸಿ ಹೈನುಗಾರಿಕೆ ಯಲ್ಲೂ ತನ್ನದೇ ಛಾಪು ಮೂಡಿಸಿದವರು. ಬೆಂಗಳೂರಿನಲ್ಲಿ ಹಲವು ವರ್ಷಗಳ ಕಾಲ ಹೋಟೆಲ್ ಉದ್ಯಮ ನಡೆಸಿ ಯಶಸ್ಸು ಸಾಧಿಸಿ ಊರಿಗೆ ಮರಳಿ, ಕಳೆದ 45ವರ್ಷಗಳಿಂದ ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಮಣೂರು, ಬ್ರಾಹ್ಮಣ ಸಭಾ ಮೊದಲಾದ ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯ ಗಳಿಂದ ಜನಮನ್ನಣೆ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ