ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ಚಾಲಕ ಬಸ್ಸಿನೊಳಗೆ ಆತ್ಮಹತ್ಯೆ
Update: 2021-09-21 09:28 GMT
ಮುಂಬೈ: ಮಹಾರಾಷ್ಟ್ರ ರಾಜ್ಯ ಸಾರಿಗೆ (ಎಸ್ಟಿ) ಬಸ್ ಚಾಲಕ ಬಸ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಅಹಮದ್ ನಗರ ಜಿಲ್ಲೆಯ ಸಂಗಮ್ ನೆರ್ ಡಿಪೋದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕ ಸುಭಾಷ್ ತೆಲೋರ್ ಬಸ್ಸಿನೊಳಗಿನ ರಾಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಭಾಷ್ ತೆಲೋರ್ ಪಥರ್ಡಿಯಿಂದ ನಾಸಿಕ್ ಗೆ ಬಸ್ ಓಡಿಸುತ್ತಿದ್ದರು. ಆದರೆ ಮುಂಬೈನಿಂದ ಸುಮಾರು 250 ಕಿ.ಮೀ. ದೂರದಲ್ಲಿರುವ ಸಂಗಮ್ ನೆರ್ ಡಿಪೋದಲ್ಲಿ ರಾತ್ರಿ ಬಸ್ಸನ್ನು ನಿಲ್ಲಿಸಿದ್ದರು ಎಂದು ಅವರು ಹೇಳಿದರು.
ಆತ್ಮಹತ್ಯೆಗೆ ನಿಖರವಾದ ಕಾರಣ ತಕ್ಷಣವೇ ತಿಳಿದಿಲ್ಲ. ಆದರೆ ಪ್ರಾಥಮಿಕ ಮಾಹಿತಿಯು ಕೆಲವು ವೈಯಕ್ತಿಕ ಕಾರಣಗಳಿಂದಾಗಿ ತೆಲೋರ್ ತನ್ನ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ಹೇಳಿದರು.