ಸೈಯ್ಯದ್ ಅಮಾನುಲ್ಲಾ

Update: 2021-09-22 14:42 GMT

ಪಡುಬಿದ್ರಿ: ಪಡುಬಿದ್ರಿ ಮೂಲದ ಮಸ್ಕತ್‍ನಲ್ಲಿ ಉದ್ಯಮಿಯಾಗಿರುವ ಸೈಯ್ಯದ್ ಅಮಾನುಲ್ಲಾ (68) ಅವರು ಹೃದಯಾಘಾತದಿಂದ ಮಸ್ಕತ್‍ನಲ್ಲಿ ಬುಧವಾರ ನಿಧನ ಹೊಂದಿದರು. 

ಮಸ್ಕತ್‍ನಲ್ಲಿ 37 ವರ್ಷಗಳ ಅಧಿಕ ಕಾಲ ವಾಚ್ ಉದ್ಯಮವನ್ನು ನಡೆಸುತ್ತಿದ್ದ ಇವರು ಮಸ್ಕತ್‍ನಲ್ಲಿ ಸಮಾಜ ಸೇವಾ ಸಂಘಟನೆಯಾದ ಇಂಡಿಯನ್ ಮುಸ್ಲಿಮ್ ಅಸೋಸಿಯೇಶನ್‍ನಲ್ಲಿ ಸೇವೆ ಸಲ್ಲಿಸುತಿದ್ದರು. ಪತ್ನಿ, ಒಂದು ಹೆಣ್ಣು, ನಾಲ್ಕು ಗಂಡು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ