ಅಬ್ದುಲ್ ರವೂಫ್‌ ಸಿಎಂಎಫ್

Update: 2021-09-27 16:09 GMT

ಮಂಗಳೂರು, ಸೆ.27: ನಗರದ ಸಿಎಂಎಫ್ ಕಂಪೆನಿಯ ಮೇಲ್ವಿಚಾರಕ, ಕುತ್ತಾರ್ ಸಮೀಪದ ಮದನಿ ನಗರ ನಿವಾಸಿ ಅಬ್ದುಲ್ ರವೂಫ್ ಸಿಎಂಎಫ್ (62) ಇಂದು ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬರು ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮಂಗಳೂರು ಅಲ್ಪಸಂಖ್ಯಾತರ ಯಾಂತ್ರಿಕ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವರು ಸೇವೆ ಸಲ್ಲಿಸಿದ್ದರು. ಇಂದು ರಾತ್ರಿ ಸುಮಾರು 8 ಗಂಟೆಗೆ ಮದನಿ ನಗರ ಜುಮಾ ಮಸ್ಜಿದ್ ಬಳಿ ದಫನ ಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ