ಕೊಡಂಗೆ ಲಕ್ಷ್ಮಣ ಕಾಮತ್
Update: 2021-10-02 13:07 GMT
ಮಣಿಪಾಲ, ಅ.2: ಇಲ್ಲಿಗೆ ಸಮೀಪದ ಕೊಡಂಗೆಯ ಆರ್ಎಸ್ಬಿ ಸಮಾಜದ ಹಿರಿಯರಲ್ಲೊಬ್ಬರಾದ ಕೊಡಂಗೆ ಲಕ್ಷ್ಮಣ ಕಾಮತ್ (92) ಇವರು ಅ.1ರಂದು ಸೃಗೃಹದಲ್ಲಿ ನಿಧನ ಹೊಂದಿದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಹೆರ್ಗ ಗ್ರಾಪಂನ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣ ಕಾಮತ್, ಕೊಡಂಗೆ ಶ್ರೀರಾಮ ಭಜನಾ ಮಂದಿರವನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.