ವೆಂಕಟೇಶ ಸಾರಂಗ
Update: 2021-10-15 14:06 GMT
ಕುಂದಾಪುರ, ಅ.15: ಸ್ಥಳೀಯ ಖ್ಯಾತ ಚಿಪ್ಪು ಉದ್ಯಮಿ ಕುಂದಾಪುರ ಖಾರ್ವಿ ಕೇರಿ ನಿವಾಸಿ ವೆಂಕಟೇಶ್ ಸಾರಂಗ (74) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಖಾರ್ವಿಕೇರಿ ಶ್ರೀಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು,ದೇವಸ್ಥಾನ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.