ಬೆಂಗಳೂರು: ಬಾಲಕರಿಗೆ ಬೀಡಿ ಸೇದಲು ಹೇಳಿ ಹಲ್ಲೆ; ಇಬ್ಬರು ಆರೋಪಿಗಳ ಬಂಧನ

Update: 2021-10-25 11:36 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.25: ಮೂವರು ಬಾಲಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಿ.ನಾರಾಯಣಪುರ ಶಾಲೆ ಬಳಿ ಮೂವರು ಬಾಲಕರು ಆಟವಾಡಲು ಹೋಗಿದ್ದರು. ಆ ಸಂದರ್ಭದಲ್ಲಿ ಅಲ್ಲೇ ಕುಳಿತಿದ್ದ ಆರು ಮಂದಿ ಯುವಕರು ಬೀಡಿ ಸೇದುತ್ತಿದ್ದರು ಎನ್ನಲಾಗಿದೆ. ಬಾಲಕರನ್ನು ಕಂಡ ಈ ಯುವಕರು ಬಾಲಕರಿಗೆ ಬೀಡಿ ಸೇದಲು ಹೇಳಿದ್ದಾರೆ. ಅವರು ಒಪ್ಪದಿದ್ದಾಗ ಮೂವರು ಬಾಲಕರನ್ನು ಮರಕ್ಕೆ ಕಟ್ಟಿ ಹಾಕಿ ಬಲವಂತವಾಗಿ ಹಲ್ಲೆ ನಡೆಸಿ ಬೀಡಿ ಸೇದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸ್ಥಳ ಪರಿಶೀಲನೆ ಮಾಡಿ ಘಟನಾ ಸುತ್ತಲಿನ ಸಿಸಿಟಿವಿ ಪರಿಶೀಲಿಸಿ ಇಬ್ಬರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News