ನೇತ್ರ ದಾನ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ನಟ ಪುನೀತ್ ರಾಜ್ ಕುಮಾರ್

Update: 2021-10-29 17:33 GMT
photo: twitter

ಬೆಂಗಳೂರು:  ಹೃದಯಾಘಾತದಿಂದ ಹಠಾತ್ ನಿಧನರಾದ ನಟ ಪುನೀತ್ ಅವರ ಕಣ್ಣುಗಳನ್ನು ಸಾವಿನ ದುಃಖದ ನಡುವೆಯೂ ಅವರ ಕುಟುಂಬದ ಸದಸ್ಯರು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದರು.

ಪುನೀತ್ ಅವರ ತಂದೆ ಡಾ.ರಾಜ್‍ಕುಮಾರ್ ಅವರು ನಿಧನರಾದಾಗ ಅವರ ನೇತ್ರಗಳನ್ನು ದಾನ ಮಾಡಲಾಗಿತ್ತು. ಆ ಸಂದರ್ಭದಲ್ಲೇ ತಮ್ಮ ನೇತ್ರಗಳನ್ನು ದಾನ ಮಾಡುವ ಪತ್ರಕ್ಕೆ ಅಪ್ಪು ಸಹಿ ಹಾಕಿದ್ದರು. ಅದರಂತೆ ಇಂದು ಅಪ್ಪು ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯದ ಸಿಬ್ಬಂದಿ ಸಂಗ್ರಹಿಸಿದ್ದು, ನಾಳೆ(ಅ.31) ಇಬ್ಬರು ಅಂಧರಿಗೆ ಆ ಕಣ್ಣುಗಳನ್ನು ಜೋಡಣೆ ಮಾಡಲಾಗುವುದು ಎಂದು ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News